ಬ್ರಾಹ್ಮಣನೂ ಭಗವದ್ಗೀಯೂ

ದಾರಿ ತಪ್ಪಿದವನೊಬ್ಬ ಬ್ರಾಹ್ಮಣ
ಅಲೆಯುತಿದ್ದ ಕಾಡಿನಲ್ಲಿ
ಮುಸ್ಸಂಜೆಯ ಸಮಯ
ಸಿಕ್ಕಿದ ಯಕ್ಷಿಯ ಬಲೆಯಲ್ಲಿ

ಹೆಣ್ಣು ರೂಪದ ಯಕ್ಷಿ
ತನ್ನ ಮನೆಗೆ ಕರೆಯಿತು
ನಾಳೆ ಹೋದರಾಯಿತೆಂದು
ಅವನ ಮನವ ಒಲಿಸಿತು

ಊಟ ಕೊಟ್ಟು ಚಾಪೆ ಹಾಕಿ
ಮಾತಾಡುತ್ತ ಕುಳಿತಿತು
ಕೈಯಲಿದ್ದ ಭಗವದ್ಗೀತೆ
ಕೆಳಗಿಡೊದನ್ನ ಕಾದಿತು

ಕಣ್ಣಿನಲ್ಲಿ ಕುಡಿನೋಟ
ಕೆಳ ಜಾರಿದ ಸೆರಗು
ಎಷ್ಟಾದರೂ ಬಡ ಬ್ರಾಹ್ಮಣ
ಆಂದುಕೊಂಡ ಕೊನೆಗು

ಗೀತೆಯಾದರೂ ಹೇಳುವುದೇನು:
ಅಡಿಯ ಮುಂದಿಡೆ ಸ್ವರ್ಗ!
ಮುನಿ ಕೂಡ ಮಾಡಿದ್ದೇನು?
ಬೆಸ್ತರವಳ ಸಂಸರ್ಗ!

ಒಗೆದೇ ಬಿಟ್ಟ ಪುಸ್ತಕ
ಅದರ ಮೇಲೆ ಧೋತರ
ಯಕ್ಷಿ ಸುಮ್ಮನೆ ನಕ್ಕಿತು-
ಯಕ್ಷಿಗಳು ನಗುವ ತರ

ಮರುದಿನ ಅಲ್ಲಿ ಕಂಡೆದ್ದೇನು?
ಮನೆಯಿದ್ದಲ್ಲಿ ತಾಳೆ!
ಕೆಳಗೆ ಹಸಿ ಹಸೀ ಮೂಳೆ ಹಾಗೂ
ಭಗವದ್ಗೀತೆಯ ಹಾಳೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೇವರಾಜ ಅರಸು : ಒಂದು ಸ್ಮರಣೆ
Next post ನಗು

ಸಣ್ಣ ಕತೆ

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

cheap jordans|wholesale air max|wholesale jordans|wholesale jewelry|wholesale jerseys